-->

Responsive Ads

Responsive Ads



6_8ನೇ ತರಗತಿ ಶಿಕ್ಷಕರ‌ ಹುದ್ದೆಗೆ ಆಯ್ಕೆಯಾಗಿದ್ದ ಯುವಕ ಶಾಲಾ‌ ಆವರಣದಲ್ಲಿ ಡೇತ್ ನೋಟ್ ಬರೆದಿಟ್ಟು ಆತ್ಮ ಹತ್ಯೆಗೆ ಶರಣು….. ರಾಜ್ಯದಲ್ಲಿ ಶಿಕ್ಷಣ‌ ಇಲಾಖೆ ಅಷ್ಟೋಂದು ಅಧೋಗತಿಗೆ ಹೋಗಿದೇಯಾ?. ಶಿಕ್ಷಕರ ಗೋಳು ಕೇಳುವವವರು ಯಾರು?



ರಾಯಚೂರು


ಸರ್ಕಾರದ ವಿರುದ್ಧ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದೆ. ಮೃತನನ್ನು ಚಿಕ್ಕ ಬೂದೂರಿನ ಯುವಕ ಚನ್ನಬಸವ (25) ಎಂದು ಗುರುತಿಸಲಾಗಿದೆ.


ಇಲ್ಲಿನ ಜ್ಞಾನಗಂಗಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಸ್ಥಳದಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದೆ.


ಆಡಳಿತ ವ್ಯವಸ್ಥೆಗೆ ಬೇಸತ್ತು ಆತ್ಮಹತ್ಯೆ…


6-8ನೇ ತರಗತಿ ಶಿಕ್ಷಕರ ಹುದ್ದೆಗೆ ಮೃತ ಚನ್ನಬಸವ ಆಯ್ಕೆಯಾಗಿದ್ದ, 2022ರಲ್ಲಿ ನೇಮಕಾತಿ ಲಿಸ್ಟ್‌ ಆತನ ಹೆಸರು ಸಹ ಇತ್ತು. ಆದರೆ ಕೊನೆ ಕ್ಷಣದಲ್ಲಿ ಹೊರಬಿದ್ದ ಮತ್ತೊಂದು ಲಿಸ್ಟ್‌ನಲ್ಲಿ ಆತನ ಹೆಸರು ಇರಲಿಲ್ಲ. ಬಳಿಕ ಮತ್ತೊಂದು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರೂ ಅದರಲ್ಲಿ ಉತ್ತೀರ್ಣನಾಗಿರಲಿಲ್ಲ.ಇದರಿಂದ ತೀವ್ರ ಬೇಸರಗೊಂಡಿದ್ದ ಆತ. ಜೀವನದಲ್ಲಿ ಆಸಕ್ತಿ ಕಳೆದುಕೊಂಡಿದ್ದ ಎನ್ನಲಾಗಿದೆ.


ಯಾರೋ ಮಾಡಿದ ತಪ್ಪಿಗೆ ವ್ಯವಸ್ಥೆ ನನಗೆ ಶಿಕ್ಷೆ ನೀಡಿದೆ. ಆಡಳಿತ ವ್ಯವಸ್ಥೆಗೆ ನನ್ನ ಧಿಕ್ಕಾರವಿರಲಿ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Response to 6_8ನೇ ತರಗತಿ ಶಿಕ್ಷಕರ‌ ಹುದ್ದೆಗೆ ಆಯ್ಕೆಯಾಗಿದ್ದ ಯುವಕ ಶಾಲಾ‌ ಆವರಣದಲ್ಲಿ ಡೇತ್ ನೋಟ್ ಬರೆದಿಟ್ಟು ಆತ್ಮ ಹತ್ಯೆಗೆ ಶರಣು….. ರಾಜ್ಯದಲ್ಲಿ ಶಿಕ್ಷಣ‌ ಇಲಾಖೆ ಅಷ್ಟೋಂದು ಅಧೋಗತಿಗೆ ಹೋಗಿದೇಯಾ?. ಶಿಕ್ಷಕರ ಗೋಳು ಕೇಳುವವವರು ಯಾರು?

Post a Comment

Advertise